ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಸೋಮವಾರ, 17 ಜುಲೈ 2017 (06:39 IST)
ಕೊಲ್ಕತ್ತಾ:ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ ಅವರ ಕಂಚಿನ ಪ್ರತಿಮೆಯನ್ನು ಅವರ ತವರು ನೆಲದಲ್ಲಿ ಅನಾವರಣಗೊಳಿಸಲಾಯಿತು.
 
ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ ಜಿಲ್ಲೆಯ ಬಿಕಾಶ್ ಮೈದಾನದಲ್ಲಿ ಎಂಟು ಅಡಿ ಎತ್ತರದ ದಾದಾ ಕಂಚಿನ ಪ್ರತಿಮೆ ನಿರ್ಮಾಣಮಾಡಲಾಗಿದೆ. ಈ ಪ್ರತಿಮೆಯನ್ನು ಸ್ವತ: ಗಂಗೂಲಿ ಲೋಕಾರ್ಪಣೆ ಮಾಡಿದರು. ಈ ವೆಳೆ ಅವರ ಅಭಿಮಾನಿಗಳು ದಾದಾ ದಾದಾ ಎಂದು ಜೈಕಾರ ಕೂಗಿ ಸಂಭ್ರಮಿಸಿದರು.
 
ಪ್ರತಿಮೆಯ ಬದಿಯಲ್ಲಿ ನಿಂತು ನಗು ಮುಖದೊಂದಿಗೆ ಫೋಟೋ ತೆಗೆಸಿಕೊಂಡಿರುವ ಗಂಗೂಲಿ, ನನ್ನಂತೆಯೇ ಕಾಣಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ