ಕೇಂದ್ರ ಸರಕಾರ ನನ್ನ ಕುಟುಂಬದ ಸದಸ್ಯರಿಗೆ ಕಿರುಕುಳ ಕೊಡುತ್ತಿದೆ. ಒಂದು ವೇಳೆ, ನನ್ನ ಪುತ್ರ ಕಾರ್ತಿಕ್ ಗೆಳೆಯರಿಗೆ ತೊಂದರೆ ಕೊಡುವ ಬದಲು ನೇರವಾಗಿ ನನ್ನ ಗುರಿಯಾಗಿಸಿ ಎಂದು ಮಾಜಿ ವಿತ್ತಖಾತೆ ಸಚಿವ ಪಿ,ಚಿದಂಬರಂ ಗುಡುಗಿದ್ದಾರೆ.
ಒಂದು ವೇಳೆ, ಕೇಂದ್ರ ಸರಕಾರಕ್ಕೆ ನನ್ನ ಗುರಿಯಾಗಿಸಬೇಕಾದಲ್ಲಿ ನೇರವಾಗಿ ಗುರಿಯಾಗಿಸಿ. ಅದನ್ನು ಬಿಟ್ಟು ರಾಜಕೀಯಕ್ಕೆ ಸಂಬಂಧವಿರದ ನನ್ನ ಪುತ್ರ ಕಾರ್ತಿಕ್ನ ಉದ್ಯಮಿ ಗೆಳೆಯರಿಗೆ ಕಿರುಕುಳ ಕೊಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.