ಸಚಿವ ಸಂಪುಟ ಸಭೆಗಳಿಗೆ ಅತಿ ಹೆಚ್ಚು ಗೈರುಹಾಜರಾದ ಇತರರೆಂದರೆ ಲೋಕೋಪಯೋಗಿ ಸಚಿವ ಎಕನಾಥ್ ಶಿಂಧೆ, ಆರೋಗ್ಯ ಸಚಿವ ದೀಪಕ್ ಸಾವಂತ್ ಙಣಕಾಸು ಸಚಿವ ಸುಧೀರ್ ಮುಂಗಾಂತಿವಾರ್ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ರಾಜಕುಮಾರ್ ಬಾಡೋಲೆ ಸ್ಥಾನ ಪಡೆದಿದ್ದಾರೆ.
ರಾಜ್ಯ ಸರಕಾರ, ಒಟ್ಟು ನಡೆಸಿದ ಸಚಿವ ಸಂಪುಟ ಸಭೆಗಳ ಸಂಖ್ಯೆ. ಸಚಿವರ ಹಾಜರಾತಿ ಕುರಿತಂತೆ ಮಾಹಿತಿ ನೀಡಿ ಆರ್ಟಿಐ ಕಾರ್ಯಕರ್ತ ಗಲಗಲಿ, ಮುಖ್ಯ ಕಾರ್ಯದರ್ಶಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಮಹಾರಾಷ್ಟ್ರ ಸರಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎನ್ಬಿ ಖೇಡ್ಕರ್, ಆರ್ಟಿಐ ಕಾರ್ಯಕರ್ತ ಗಲಗಲಿ ಅರ್ಜಿಗೆ ಉತ್ತರಿಸಿ ಕಳೆದ 2014ರ ಡಿಸೆಂಬರ್ 11 ರಿಂದ ಜೂನ್ 23 2015ರ ವರೆಗೆ ಒಟ್ಟು 28 ಬಾರಿ ಸಚಿವ ಸಂಪುಟ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.