ಘಟನೆ ನಡೆದ ಸಂದರ್ಭದಲ್ಲಿ ಖುಷ್ವಂತ್ ಮನೆಯಲ್ಲಿರಲಿಲ್ಲ.
ವರದಿಗಳ ಪ್ರಕಾರ ಖುಷ್ವಂತ್ ಅವರ ಮನೆಯ ಕೆಲಸಕಾರ ಸಂತೋಷ್ ಕುಮಾರ್ ಆ ಪಾರ್ಸೆಲ್ ತೆರೆಯುತ್ತಿದ್ದಾಗ ಅದು ಸ್ಪೋಟಗೊಂಡಿದೆ. ಪರಿಣಾಮ ಸಂತೋಷ್ ಮತ್ತು ಆತನ ಹತ್ತಿರ ನಿಂತಿದ್ದ ಖುಷ್ವಂತ್ ಅವರ ಭಾವ ಗಾಯಗೊಂಡರು. ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಂತೋಷ್ ಸಾವನ್ನಪ್ಪಿದ್ದಾರೆ.