ಜೆಡಿಯು ನಾಯಕನಿಗೆ ಕಳುಹಿಸಲಾಗಿದ್ದ ಪಾರ್ಸೆಲ್ ಸ್ಪೋಟ: ಒಂದು ಸಾವು

ಮಂಗಳವಾರ, 26 ಮೇ 2015 (11:33 IST)
ಜೆಡಿಯು ಜಿಲ್ಲಾಧ್ಯಕ್ಷ ಅಭಯ್ ಖುಷ್ವಂತ್ ಅವರಿಗೆ ಕಳುಹಿಸಲಾಗಿದ್ದ ಪಾರ್ಸೆಲ್ ಸ್ಪೋಟಗೊಂಡು ಒಬ್ಬ ಮೃತಪಟ್ಟು ಇನ್ನೊಬ್ಬ ಗಾಯಗೊಂಡ ಘಟನೆ ಗಯಾದಲ್ಲಿ ಮಂಗಳವಾರ ನಡೆದಿದೆ. 
ಘಟನೆ ನಡೆದ ಸಂದರ್ಭದಲ್ಲಿ ಖುಷ್ವಂತ್ ಮನೆಯಲ್ಲಿರಲಿಲ್ಲ. 
 
ವರದಿಗಳ ಪ್ರಕಾರ ಖುಷ್ವಂತ್ ಅವರ ಮನೆಯ ಕೆಲಸಕಾರ ಸಂತೋಷ್ ಕುಮಾರ್ ಆ ಪಾರ್ಸೆಲ್ ತೆರೆಯುತ್ತಿದ್ದಾಗ ಅದು ಸ್ಪೋಟಗೊಂಡಿದೆ. ಪರಿಣಾಮ ಸಂತೋಷ್ ಮತ್ತು ಆತನ ಹತ್ತಿರ ನಿಂತಿದ್ದ ಖುಷ್ವಂತ್ ಅವರ ಭಾವ  ಗಾಯಗೊಂಡರು. ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಂತೋಷ್ ಸಾವನ್ನಪ್ಪಿದ್ದಾರೆ. 
 
ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸೋಮವಾರ ತಡರಾತ್ರಿ ಸಚಿವರ ನಿವಾಸದ ಹೊರಗೆ ಪಾರ್ಸೆಲ್ ಇಟ್ಟವರಿಗಾಗಿ ಶೋಧ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ