ಮಗನ ಹಿಂಸೆಯಿಂದಾಗಿ ಸದಾ ಭಯದಿಂದಲೇ ಬದುಕುತ್ತಿದ್ದ ವೃದ್ಧ ತಂದೆತಾಯಿಗಳು ಆತನಿಂದ ಮುಕ್ತಿಯನ್ನು ಬಯಸಿದ್ದರು. ಹೀಗಾಗಿ ಆತನನ್ನು ಕೊಲ್ಲಲು ನಿಶ್ಚಯಿಸಿದ ಅವರು ತಮ್ಮ ಬುದ್ಧಿಮಾಂದ್ಯ ಬಾಲಕನ ಎದುರುಗಡೆಯೇ ಹಿರಿಯ ಮಗನನ್ನು ಕೊಲೆ ಮಾಡಿದ್ದಾರೆ. ಸುತ್ತಿಗೆಯಿಂದ ಆತನ ಮೇಲೆ ದಾಳಿ ಮಾಡಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ತಮ್ಮ ಕೃತ್ಯವನ್ನು ಮುಚ್ಚಿ ಹಾಕಲು ಕಲ್ಲು ಕತ್ತರಿಸುವ ಯಂತ್ರದಿಂದ ಮಗನ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.