ಶ್ರೀನಗರ್-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಮ್ಬನ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಒಮರ್, ಪಿಡಿಪಿ ನಾಯಕತ್ವದ ಅಸ್ಥಿರತೆಯಿಂದಾಗಿ ಅಡಳಿತ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಯಾರು ನಿಜವಾದ ಮುಖ್ಯಮಂತ್ರಿ ಎನ್ನುವ ಗೊಂದಲಕ್ಕೆ ಸಿಲುಕಿದೆ ಎಂದು ಲೇವಡಿ ಮಾಡಿದರು.
ಸಮ್ಮಿಶ್ರ ಸರಕಾರದ ಅಂತರಿಕ ವ್ಯವಹಾರಗಳ ಬಗ್ಗೆ ನಮಗೆ ಆಸಕ್ತಿಯಿಲ್ಲ. ಮುಫ್ತಿ ಮೊಹಮ್ಮದ್ ಆಗಿರಲಿ ಅಥವಾ ಮೆಹಬೂಬಾ ಮುಫ್ತಿಯಾಗಿರಲಿ. ಆದರೆ, ಮುಖ್ಯ ವಿಷಯವೆಂದರೆ ಜನತೆ ಸಂಕಷ್ಟಕ್ಕೆ ಈಡಾಗಿರುವುದು ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.