ಜಮ್ಮು ಕಾಶ್ಮಿರ ಮತ್ತು ಲಡಾಕ್ ಪ್ರದೇಶದಲ್ಲಿರುವ ಬಹುತೇಕ ನಿವಾಸಿಗಳು ಭಾರತದ ಅವಿಭಾಜ್ಯ ಎಂದು ಭಾವಿಸಿದ್ದಾರೆ. ರಾಜಕೀಯ ನಾಯಕರು ಯಾವ ರೀತಿ ಬೇಕಾದರು ಹೇಳಲಿ. ಆದರೆ, ಇಲ್ಲಿರುವ ಜನತೆ ತಾವು ಭಾರತದ ನಾಗರಿಕರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಜಮ್ಮು ಕಾಶ್ಮಿರದ ಜನತೆಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಿ ನೆರವು ನೀಡಲು ಕೇಂದ್ರ ಸರಕಾರ ಸಿದ್ದವಾಗಿದೆ.ಜಮ್ಮು, ಲಡಾಕ್ ಮತ್ತು ಕಾಶ್ಮಿರ ಪ್ರದೇಶದ ಜನತೆಗೆ ಸರಕಾರ ಬೃಹತ್ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ಪ್ರದಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದ್ದಾರೆ.