ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಜಾರಿಯ ಬಗ್ಗೆ ಜನತೆಯ ಅಭಿಪ್ರಾಯ ತಿಳಿಯಲು ನಗರಾದ್ಯಂತ ಜನಸಭಾಗಳನ್ನು ಆಯೋಜಿಸಲಾಗುವುದು, ಜನತೆಯ ಅಭಿಪ್ರಾಯಗಳಿಗೆ ಸ್ಪಂದಿಸಿ ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ದಳ, ಎನ್ಸಿಸಿ, ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಪಡೆದ ನಂತರ ಸಿಎಂ ಕೇಜ್ರಿವಾಲ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಚಾಲನೇ ನೀಡಲಾಯಿತು.