ಆಯೆಂಗೆ ಅಚ್ಛೆ ದಿನ: ಎಲ್ಲರ ಬ್ಯಾಂಕ್‌ ಅಕೌಂಟ್‌ ಒಪನ್‌ ಆಗಲಿದೆ

ಶನಿವಾರ, 30 ಆಗಸ್ಟ್ 2014 (15:20 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಜ್ಞಾನ ಭವನದಲ್ಲಿ ಆಯೋಜಿತ ಸಮಾರಂಭದಲ್ಲಿ ಪ್ರಧಾನಮಂತ್ರಿ ಜನಧನ ಯೋಜನೆಗೆ ಶುಭಾರಂಭ ಮಾಡಿದ್ದಾರೆ. 
 
ಈ ಯೋಜನೆ ಮೂಲಕ ಎಲ್ಲಾ ಕುಟುಂಬದವರಿಗೆ 5000 ರೂಪಾಯಿಗಳ ಓವರ್‌ಡ್ರಾಪ್ಟ್‌‌ ಸೌಲಬ್ಯ ಸಿಗುವುದು, ಎಟಿಎಂ ಕಾರ್ಡ್ ಮತ್ತು ವಿಮೆ ಯೋಜನೆ ಸಿಗುವುದು. ಈ ಮೂಲಕ ಬಡತನವನ್ನು ಪೂರ್ಣಪ್ರಮಾಣದಲ್ಲಿ ತೊಲಗಿಸುವ ಆಹ್ವಾನ ನೀಡಿದ್ದಾರೆ. 
 
" ಒಂದೇ ದಿನದಲ್ಲಿ ಎರಡೂವರೆ ಕೋಟಿ ಜನರಿಗೆ ವಿಮೆ ಮತ್ತು ಬ್ಯಾಂಕ್‌ ಖಾತೆ ತೆರೆದಿದ್ದಾರೆ, ಇದು ನಮ್ಮಲ್ಲಿ ಒಂದು ದೊಡ್ಡ ದಾಖಲೆಯಾಗಿದೆ" ಎಂದು ಪ್ರಧಾನಮಂತ್ರಿ ಜನಧನ ಯೋಜನೆಯ ಶುಭಾರಂಭ ಮಾಡಿ ಹೇಳಿದ್ದಾರೆ. 
 
77,000 ಸ್ಥಳಗಲ್ಲಿ ಏಕಕಾಲಕ್ಕೆ ಕಾರ್ಯಕ್ರಮ, ಒಂದೇ ಬಾರಿಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕಾರ್ಯಕ್ರಮ ಮಾಡಿದ ಸರಕಾರಕ್ಕೆ ಇದು ಮೊದಲ ಅನುಭವವಾಗಿದೆ. " ಅಧಿಸೂಚನೆ ಹಾರಿಗೆಯಾದಾಗ, ಸಭೆ ನಡೆದಾಗ ಮತ್ತು ಯೋಜನೆ ಪೂರ್ಣಪ್ರಮಾಣದಲ್ಲಿ ಆಗದಿದ್ದರೆ ಮತ್ತೆ ಯೋಜನೆ ಮಾಡಲಾಗುವುದು" ಎಂದು ಮೋದಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ