ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿಜಿ ಬರುತ್ತಾರೆ, ಭರವಸೆ ನೀಡುತ್ತಾರೆ ಮತ್ತು ಹೋಗುತ್ತಾರೆ. ಮೋದಿ ಯಾವುದಾದರೂ ಭರವಸೆ ಈಡೇರಿಸಿದ್ದಾರಾ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ ಎಂದು ತಿರುಗೇಟು ನೀಡಿದರು.
ಕಳೆದ 15 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಶಾಂತಿ, ನೆಮ್ಮದಿ ತಂದಿರುವುದು ಬಹುದೊಡ್ಡ ಸಾಧನೆ. ನಾನು ಆಸ್ಸಾಂ ರಾಜ್ಯಕ್ಕೆ ಬಂದಾಗಲೆಲ್ಲಾ ಸಿಎಂ ಗೋಗೈಯವರು ಜನತೆಯ ಬಗ್ಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾರೆ. ನಿಮಗೆ ನೆರವಾಗಲು ಸದಾ ಸಿದ್ದರಾಗಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಸಮಾನ ಹಕ್ಕು ಇರಬೇಕು ಎನ್ನುವುದು ನಾವು ಬಯಸುತ್ತೇವೆ ಎಂದರು.