ಪ್ರಚಾರದ ಮಧ್ಯೆ ದನಕರುಗಳಿಗೆ ಹುಲ್ಲು, ಬೆಲ್ಲ ತಿನ್ನಿಸಿದ ಪ್ರಧಾನಿ

ಸೋಮವಾರ, 6 ಮಾರ್ಚ್ 2017 (15:04 IST)
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಇಂದು ವಾರಣಾಸಿಯಲ್ಲಿ ದನಕರುಗಳಿಗೆ ಹುಲ್ಲು, ಹಣ್ಣು, ಮೇವು ತಿನ್ನಿಸುವ ಮೂಲಕ ಗಮನ ಸೆಳೆದರು.
ಗಧ್ವಾ ಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಗೋಶಾಲೆಯಲ್ಲಿರುವ ದನಕರುಗಳ ಮೈ ದಡವಿ ಹುಲ್ಲು, ಹಣ್ಣು, ಬೆಲ್ಲ ತಿನ್ನಿಸಿದರು. ಪ್ರಧಾನಿ ಸರಳತೆ ಅಲ್ಲಿದ್ದವರನ್ನು ಮೂಕವಿಸ್ಮಿತಗೊಳಿಸಿತು.
 
ಇಂದು ಕೊನೆಯ ದಿನದ ಪ್ರಚಾರ ನಡೆಸುತ್ತಿರುವ ಪ್ರಧಾನಿ ರೋಹನಿಯಾ ಪ್ರದೇಶದಲ್ಲಿ ಪ್ರಚಾರ ನಡೆಸಲಿದ್ದಾರೆ. ಇದು ಅವರು ಲೋಕಸಭೆಗೆ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಡಿಯಲ್ಲಿ ಬರುತ್ತದೆ.
 
ಕಳೆದ ನಾಲ್ಕು ದಿನಗಳಿಂದ ಪ್ರಧಾನಿ ವಾರಣಾಸಿ ಪ್ರವಾಸದಲ್ಲಿದ್ದಾರೆ. ಕಳೆದ ಶುಕ್ರವಾರದಿಂದ ಮೂರು ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳನ್ನು ನಡೆಸಿದ್ದಾರೆ

ವೆಬ್ದುನಿಯಾವನ್ನು ಓದಿ