ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ಮೋದಿ ಇಂದು ವಾರಣಾಸಿಯಲ್ಲಿ ದನಕರುಗಳಿಗೆ ಹುಲ್ಲು, ಹಣ್ಣು, ಮೇವು ತಿನ್ನಿಸುವ ಮೂಲಕ ಗಮನ ಸೆಳೆದರು.
ಗಧ್ವಾ ಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಗೋಶಾಲೆಯಲ್ಲಿರುವ ದನಕರುಗಳ ಮೈ ದಡವಿ ಹುಲ್ಲು, ಹಣ್ಣು, ಬೆಲ್ಲ ತಿನ್ನಿಸಿದರು. ಪ್ರಧಾನಿ ಸರಳತೆ ಅಲ್ಲಿದ್ದವರನ್ನು ಮೂಕವಿಸ್ಮಿತಗೊಳಿಸಿತು.