ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್, ಸಾರ್ವಜನಿಕ ಸಭೆಗೆ ಆಗಮಿಸುತ್ತಿದ್ದಂತೆ ವಿವಿಧ ದಿಕ್ಕುಗಳಿಂದ ಬಂದ ಪಟೇಲ್ ಸಮುದಾಯದ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಉದ್ರಿಕ್ತ ವಾತಾವರಣ ನಿರ್ಮಿಸಿದರು. ಜನರನ್ನು ಚದುರಿಸಿದ ಪೊಲೀಸರು, ಹಾರ್ದಿಕ್ ತಾಯಿ ಮತ್ತು ಅವರ ಸಹೋದರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.