"ಸಹರಾಣಪುರದಲ್ಲಿ ನಡೆಯುತ್ತಿರುವ ಹಿಂಸೆಯ ಬಗ್ಗೆ ಕೇಳಿ ನನಗೆ ತುಂಬ ದುಃಖವಾಗಿದೆ. ಭೇದ ಚಿಂತನೆ ಮತ್ತು ದ್ವೇಷಕ್ಕೆ ದೇಶದಲ್ಲಿ ಯಾವ ಸ್ಥಾನವೂ ಇಲ್ಲ. ದ್ವೇಷದ ರಾಜಕಾರಣ ನಿಲ್ಲಲೇ ಬೇಕಿದೆ. ಆ ಕಾರಣ ಶಾಂತಿಯನ್ನು ಕಾಪಾಡುವಂತೆ, ಕೋಮುವಾದವನ್ನು ಹರಡದಂತೆ ನಾನು ಎಲ್ಲ ರಾಜಕೀಯ ಪಕ್ಷಗಳನ್ನು ಮನವಿ ಮಾಡಿಕೊಳ್ಳುತ್ತೇನೆ" ಎಂದು ಅವರು ಹೇಳಿದ್ದಾರೆ.
ಕೇವಲ ಜಮೀನೊಂದರ ಕುರಿತಂತೆ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದಲ್ಲಿ 2 ಜನ ಸತ್ತು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಅಗ್ನಿಸ್ಪರ್ಶ, ವಿಧ್ವಂಸಕ ಕೃತ್ಯ ಮತ್ತು ಗೋಲಿಬಾರಿಯಂತಹ ಕೃತ್ಯಗಳು ನಡೆದಿದ್ದು, ಸುತ್ತಲಿನ ಕೆಲವು ಇಲಾಖೆಗಳಲ್ಲಿ ಕರ್ಫ್ಯೂವನ್ನು ಘೋಷಿಸಲಾಗಿದೆ.