ಅವರ ತಿರಸ್ಕರಿಸಿದ ಅರ್ಜಿಗಳಲ್ಲಿ 26/11 ಮುಂಬೈ ಉಗ್ರ ದಾಳಿ ಅಪರಾಧಿ ಅಜ್ಮಲ್ ಕಸಬ್ (ನವೆಂಬರ್ 21, 2012ರಲ್ಲಿ ಗಲ್ಲಿಗೇರಿದ), ಸಂಸತ್ ದಾಳಿ ಅಪರಾಧಿ ಅಫ್ಜಲ್ ಗುರು (ಫೆಬ್ರವರಿ 10, 2013ರಂದು ಗಲ್ಲಿಗೇರಿದ) ಮತ್ತು ಯಾಕೂಬ್ ಮೆಮನ್ 1993ರಲ್ಲಿ ನಡೆದ ಮುಂಬೈ ಸರಣಿ ದಾಳಿ ಅಪರಾಧಿ ( ಜುಲೈ 30, 2015 ರಂದು ಗಲ್ಲಿಗೇರಿದ) ಅವರದು ಕೂಡ ಸೇರಿದೆ. ಈ ಎಲ್ಲ ಪ್ರಕರಣಗಳು ಮರಣದಂಡನೆ ಶಿಕ್ಷೆ ರದ್ದು ಕುರಿತಂತೆ ದೇಶಾದ್ಯಂತ ಚರ್ಚೆ ಏಳಲು ಪ್ರಚೋದನೆ ನೀಡಿದವು.
ಇತ್ತೀಚಿಗೆ ತಿರಸ್ಕೃತವಾದ ಅರ್ಜಿ ಎಂದರೆ, ಹೊಶಿಯಾರ್ಪುರದ ನಿವಾಸಿಗಳಾದ ವಿಕ್ರಮ್ ಸಿಂಗ್ ವಾಲಿಯಾ ಮತ್ತು ಜಸ್ವೀರ್ ಸಿಂಗ್ ಎಂಬುವವರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿ. ಅವರಿಬ್ಬರು 16 ವರ್ಷದ ಬಾಲಕನನ್ನು ಕೊಂದ ಅಪರಾಧಕ್ಕೆ ಗಲ್ಲು ಶಿಕ್ಷೆಗೊಳಗಾಗಿದ್ದಾರೆ. ಸುಪ್ರೀಂ ಕೋರ್ಟ್ ಮೇ 2012ರಲ್ಲಿ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ರಾಷ್ಟ್ರಪತಿ ಬಳಿ ಹೋಗಿದ್ದ ಅವರ ಕ್ಷಮಾದಾನ ಅರ್ಜಿ ಆಗಸ್ಟ್ 7 ರಂದು ತಿರಸ್ಕೃತವಾಗಿದೆ.
ಮುಖರ್ಜಿ ಅವರಿಂದ ತಿರಸ್ಕೃತಗೊಂಡ ಅರ್ಜಿಗಳ ಸಂಖ್ಯೆ ಏಕೆ ಮಹತ್ವವನ್ನು ಪಡೆಯುತ್ತದೆ ಅಂದರೆ ಸ್ವಾತಂತ್ರ್ಯಾ ನಂತರ ಇಲ್ಲಿಯವರೆಗೆ 7,012 ಜನರಿಗೆ ಮರಣದಂಡನೆ ಶಿಕ್ಷೆಯನ್ನು ಆದೇಶಿಸಲಾಗಿತ್ತು. ಅವರಲ್ಲಿ 58 ಜನರನ್ನು ಮಾತ್ರ ಇಲ್ಲಿಯವರೆಗೆ ಗಲ್ಲಿಗೇರಿಸಲಾಗಿದೆ.