ರಾಷ್ಟ್ರಪತಿ ಚುನಾವಣೆ ಹಿನ್ನಲೆ: ಅಮಿತ್ ಶಾರಿಂದ ಉದ್ಧವ್ ಠಾಕ್ರೆ ಭೇಟಿ

ಭಾನುವಾರ, 18 ಜೂನ್ 2017 (17:45 IST)
ಮುಂಬೈ: ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.  
 
ಅಮಿತ್‌ ಷಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೊಂದಿಗೆ ಬಾಂದ್ರಾದ ಉಪನಗರದಲ್ಲಿರುವ ಠಾಕ್ರೆ ಅವರ ‘ಮಾತೋಶ್ರೀ‘ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬೆಳಿಗ್ಗೆ 10ಕ್ಕೆ ಠಾಕ್ರೆ ಅವರ ನಿವಾಸದಲ್ಲಿ ಆರಂಭವಾದ ಸಭೆ ಸುಮಾರು 70 ನಿಮಿಷ ಕಾಲ ನಡೆದಿದೆ.
 
ಈ ವೇಳೆ ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಘೋಷಿಸಿದ ನಂತರವಷ್ಟೇ ಬೆಂಬಲ ಕುರಿತು ತಮ್ಮ ನಿಲುವು ಸ್ಪಷ್ಟ ಪಡಿಸುವುದಾಗಿ ಶಿವಸೇನೆ ಹೇಳಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ