ಅಹಮ್ಮದಾಬಾದ್: ಬಾಹುಬಲಿ ಸಿನಿಮಾ ನಮ್ಮ ದೇಶದಲ್ಲಿ ಅದೆಂತೆಂಥಾ ಪ್ರಭಾವ ಬೀರಿದೆ ಎಂಬುದಕ್ಕೆ ಇದೊಂದು ಲೇಟೆಸ್ಟ್ ಉದಾಹರಣೆ. ಸ್ವಯಂಘೋಷಿತ ಸಾಧ್ವಿಯೊಬ್ಬಳು ಬಾಹುಬಲಿ ಸಿನಿಮಾ ನೋಡಿ ಪರಾರಿಯಾಗಿದ್ದಾಳೆ.
5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಾಧ್ವಿ ಜೈ ಶ್ರೀ ಗಿರಿ ವೈದ್ಯಕೀಯ ತಪಾಸಣೆಗಾಗಿ ಪರೋಲ್ ಮೇಲೆ ಹೊರಬಂದಿದ್ದಳು. ಆದರೆ ನಂತರ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ, ಸ್ಪಾ ಒಂದಕ್ಕೆ ಭೇಟಿ ನೀಡಿದ್ದಲ್ಲದೆ, ಬಾಹುಬಲಿ ಸಿನಿಮಾ ವೀಕ್ಷಿಸಿ ನಾಪತ್ತೆಯಾಗಿದ್ದಾಳೆ.
ಆಕೆಯ ಮೇಲೆ ಹದ್ದಿನಗಣ್ಣಿಡಲು ನಾಲ್ವರು ಪೊಲೀಸರನ್ನು ನೇಮಿಸಲಾಗಿತ್ತು. ಹಾಗಿದ್ದರೂ, ಅವರ ಮನವೊಲಿಸಿದ ಸಾಧ್ವಿ ಮಾಲ್ ಒಂದಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಶೌಚಾಲಯಕ್ಕೆ ತೆರಳುವುದಾಗಿ ನೆಪ ಹೇಳಿ ಪರಾರಿಯಾಗಿದ್ದಾಳೆ. ಇದೀಗ ಪೊಲೀಸರು ಆಕೆಯ ಪತ್ತೆಗಾಗಿ ಬಲೆ ಬೀಸಿದ್ದಾರೆ.