ರಘುರಾಮ್ ರಾಜನ್ ಉತ್ತಮ ಗವರ್ನರ್: ಸುಬ್ರಹ್ಮಣ್ಯಂ ಸ್ವಾಮಿಗೆ ಪ್ರಧಾನಿ ಮೋದಿ ನೇರ ಟಾಂಗ್

ಸೋಮವಾರ, 27 ಜೂನ್ 2016 (17:15 IST)
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ನೀಡುತ್ತಿರುವ ಅಸಮಂಜಸ ಹೇಳಿಕೆಗಳು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ನೇರ ಟಾಂಗ್ ನೀಡಿದ್ದಾರೆ.
 
ರಘುರಾಮ್ ರಾಜನ್ ಭಾರತದ ಆರ್ಥಿಕತೆಯ ವಿರೋಧಿ, ಅಮೆರಿಕದ ಏಜೆಂಟ್ ಎಂದು ಹೀಯಾಳಿಸಿದ್ದಲ್ಲದೇ ಅವರನ್ನು ಗವರ್ನರ್ ಸ್ಥಾನದಿಂದ ವಜಾಗೊಳಿಸುವಂತೆ ಸ್ವಾಮಿ ಪ್ರಧಾನಿ ಮೋದಿಗೆ ಪತ್ರ ಬರೆದು ಒತ್ತಡ ಹೇರಿದ್ದರು.
 
ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ವೇಟರ್ ಥರ ಕಾಣಿಸ್ತಾರೆ ಎಂದು ಹೀಯಾಳಿಸಿದ್ದಲ್ಲದೇ ಅವರ ಉಡುಗೆ ತೊಡುಗೆಗಳನ್ನು ಬದಲಿಸುವಂತೆ ಲೇವಡಿ ಮಾಡಿ ಬಿಜೆಪಿ ಮುಖಂಡರ ಕೆಂಗೆಣ್ಣಿಗೆ ಗುರಿಯಾಗಿದ್ದರು.
 
ಬಿಜೆಪಿ ನಾಯಕರ ವಿರುದ್ಧವೇ ಸುಬ್ರಹ್ಮಣ್ಯಂ ಸ್ವಾಮಿ ಹೇಳಿಕೆ ನೀಡುತ್ತಿರುವುದು ಬಿಜೆಪಿ ಹೈಕಮಾಂಡ್ ಶಿಸ್ತು ಕ್ರಮ ಜರುಗಿಸಲು ನಿರ್ಧರಿಸಿತ್ತು. ಆದರೆ, ಅದಕ್ಕಿಂತ ಮುಂಚೆ ಕಾದು ನೋಡುವ ನಿರ್ಧಾರವನ್ನು ಪ್ರಕಟಿಸಿತ್ತು.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ