ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪ್ರಧಾನಿ ಮೋದಿ ಕರ್ತವ್ಯದ ಮೇಲೆ ನಂಬಿಕೆಯಿಡುತ್ತಾರೆ. ಕಾಂಗ್ರೆಸ್ನಂತೆ ದೇಶ ವಿಭಜಿಸುವುದರಲ್ಲಿ ಅಲ್ಲ ಎಂದು ತಿರುಗೇಟು ನೀಡಿದೆ.
ಬಡವರೊಂದಿಗೆ ಕೇವಲ ಫೋಟೋಗಳನ್ನು ತೆಗೆದುಕೊಂಡಲ್ಲಿ ಅಥವಾ ಅವರ ಜೊತೆ ಊಟ ಮಾಡಿದಲ್ಲಿ ನೆರವಾದಂತೆ ಆಗುವುದಿಲ್ಲ.ಆದರೆ, ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನೆರವಾಗಬಹುದು ಎಂದು ಮೋದಿ ಭಾವಿಸಿದ್ದಾರೆ. ಮೋದಿಯವರಂತೆ ನೀವು ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಕಾರ್ಯದರ್ಶಿ ಸಿದ್ಧಾರ್ಥ ನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.