ಭೂಸ್ವಾಧೀನ ಮಸೂದೆ ಕುರಿತಂತೆ ಯೂ-ಟರ್ನ್ ಹೊಡೆದ ಮೋದಿ ಸರಕಾರದ ಕ್ರಮವನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರಕಾರ ಮೊದಲು ಬೆದರಿಸಿತು ನಂತರ ಜೋರಾಗಿ ಕೂಗಿತು. ಆದರೆ ಕಾಂಗ್ರೆಸ್ ಪಕ್ಷದ ಕಠಿಣ ನಿಲುವು ಕಂಡು ಇದೀಗ ಓಡಿ ಹೋಗಿದೆ ಎಂದರು.
ಭೂಸ್ವಾಧೀನ ಮಸೂದೆ ಕುರಿತಂತೆ ಕೇಂದ್ರ ಸರಕಾರದ ಎದುರು ಕಾಂಗ್ರೆಸ್ ಬಲವಾಗಿ ನಿಂತಿತ್ತು. ಆರಂಭದಲ್ಲಿ ಮೋದಿ ಸರಕಾರ ಜೋರಾಗಿ ಗದ್ದಲ ಮಾಡಿತು, ಹೆದರಿಸಿತು,ಆದರೆ ಯಾವುದೇ ಪ್ರಯೋಜನವಾಗದಿರುವುದು ಕಂಡು ಯೂ-ಟರ್ನ್ ತೆಗೆದುಕೊಂಡು ಓಡಿಹೋಯಿತು ಎಂದು ವ್ಯಂಗ್ಯವಾಡಿದರು.
ಅದರಂತೆ, ಲಲಿತ್ಗೇಟ್ ಮತ್ತು ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಕಲಾಪ ನಡೆಯಲು ಬಿಡುವುದಿಲ್ಲ. ಮೋದಿ ಸರಕಾರ ನಮ್ಮೆಲ್ಲರನ್ನು ಸಂಸತ್ತಿನಿಂದ ಹೊರಹಾಕಿದರೂ ಪರವಾಗಿಲ್ಲ. ಹೋರಾಟ ಮುಂದುವರಿಯಲಿದೆ ಎಂದರು.