20 ವರ್ಷದ ಹಿಂದೂ ಯುವಕನನ್ನು ಆತ ಪ್ರೀತಿಸಿದ ಮುಸ್ಲಿಮ್ ಯುವತಿಯ ಮನೆಯವರು ಕೊಂದಿದ್ದಾರೆ ಎಂದು ಆರೋಪಿಸಿ ಮುಜಪ್ಫರ್ಪುರದಲ್ಲಿ ದಂಗೆ ಉಂಟಾಗಿತ್ತು. ಆ ಸಮಯದಲ್ಲಿ 5,000 ಜನರು ಅಜಿಜ್ಪುರ ಬಹಿಲ್ವಾರಾ ಗ್ರಾಮದ ಮುಸ್ಲಿಮರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ತಮ್ಮ ನೆರೆಹೊರೆಯವರ ಪ್ರಾಣ ಅಪಾಯದಲ್ಲಿರುವುದನ್ನು ಗಮನಿಸಿದ ಶೈಲ್ ದೇವಿ ಅವರನ್ನು ತಮ್ಮ ಮನೆಯಲ್ಲಿ ಅಡಗಿಸಿಟ್ಟು ಕಾಪಾಡಿದ್ದರು.