ಪುಲ್ವಾಮಾದಲ್ಲಿ ರೈತ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 'ಸಂಪೂರ್ಣ ದೇಶದ ಕೃಷಿಕರು ಇಂದು ಕಷ್ಟದಲ್ಲಿ ಸಿಲುಕಿದ್ದಾರೆ. ಆದರೆ ಸರ್ಕಾರ ಎರಡು, ಮೂರು ದೊಡ್ಡ ಉದ್ಯಮಪತಿಗಳಿಗಷ್ಟೇ ಮೀಸಲಾಗಿದೆ', ಎಂದು ಕಿಚಾಯಿಸಿದ್ದಾರೆ.
ರಾಹುಲ್ ಗಾಂಧಿ ಎರಡು ದಿನಗಳ ಜಮ್ಮು ಕಾಶ್ಮೀರ ಪ್ರವಾಸದಲ್ಲಿದ್ದಾರೆ
ನಿನ್ನೆ ಪೂಂಚ್ ಜಿಲ್ಲೆಯ ಬಾಲಾಕೋಟ್ನಲ್ಲಿ, ಪಾಕಿಸ್ತಾನದ ಶೆಲ್ ದಾಳಿಗೆ ಸಿಲುಕಿ ನಲುಗಿ ಹೋಗಿರುವ ಗ್ರಾಮಸ್ಥರನ್ನು ಭೇಟಿಯಾದ ರಾಹುಲ್ ಅವರಿಗೆ ಸಾಂತ್ವನ ಹೇಳಿದರು.