ಎಐಸಿಸಿಯಿಂದ ಕೆಲವು ದಿನಗಳ ಕಾಲ ರಜೆ ಪಡೆದಿದ್ದ ರಾಹುಲ್ ಗಾಂಧಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಕಾಂಗ್ರೆಸ್ ನಾಯಕ ಜಗದೀಶ್ ಶರ್ಮಾ ಉತ್ತರಾಖಂಡದಲ್ಲಿ ರಾಹುಲ್ ತಂಗಿರುವ ಚಿತ್ರಗಳನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದು, ರಾಹುಲ್ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ. ಆದರೆ ಜಗದೀಶ್ ಶರ್ಮಾ ಮಾಹಿತಿ ಸುಳ್ಳೆಂದು ರಾಹುಲ್ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದೆ. ಶರ್ಮಾ ನೀಡಿರುವುದು 2008ರಲ್ಲಿ ಕ್ಲಿಕ್ಕಿಸಿದ ಫೋಟೋಗಳಾಗಿದ್ದು, ಉತ್ತರಾಖಂಡ್ನಲ್ಲಿರುವ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆಂದು ಕಚೇರಿ ಸಿಬ್ಬಂದಿ ಹೇಳಿದೆ.