ಯುವಕರು, ಮಕ್ಕಳು, ಜವಾಬ್ದಾರಿ ಸ್ಥಾನದಲ್ಲಿರುವವರು ಎಂಬ ಪರಿಗಣನೆ ಇಲ್ಲದೇ ಎಲ್ಲರಿಗೂ ಸೆಲ್ಫಿ ಹುಚ್ಚು ಹಿಡಿದಿದೆ ಎಂದೆನಿಸುತ್ತದೆ. ಇದೇ ಸೆಲ್ಫಿ ಹುಚ್ಚಿನಲ್ಲಿ ಮಹಾರಾಷ್ಟ್ರದ ಸಚಿವೆಯೊಬ್ಬರು ಬರಪೀಡಿತ ಪ್ರದೇಶದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಪಹಾಸ್ಯಕ್ಕೆ, ಖಂಡನೆಗೆ ಗುರಿಯಾಗಿದ್ದರು. ಇದೀಗ ಜೈಪುರ ಮಹಿಳಾ ಆಯೋಗದ ಸದಸ್ಯರೊಬ್ಬರು ಇಂತಹದೇ ಅಸಂವೇದನಾಶೀಲ, ಆಘಾತಕಾರಿ ಕೃತ್ಯವನ್ನೆಸಗಿದ್ದಾರೆ. ಅವರು ಅತ್ಯಾಚಾರ ಪೀಡಿತೆಯ ಜತೆ ಸೆಲ್ಫಿ ಕ್ಕಿಕ್ಕಿಸಿಕೊಂಡಿದ್ದು ಇದೀಗ ವೈರಲ್ ಆಗಿ ಹರಿದಾಡುತ್ತಿದೆ. ಮತ್ತೀ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಇಂತಹ ಸೂಕ್ಷ್ಮ ವಿಷಯದಲ್ಲಿ ಜವಾಬ್ದಾರಿ ತೋರಬೇಕಾದ, ಪೀಡಿತೆಗೆ ಸಾಂತ್ವನ ಹೇಳಬೇಕಾದ, ಆಕೆಯ ಪರ ನಿಲ್ಲಬೇಕಾದ ಮಹಿಳಾ ಆಯೋಗದವರೇ ಇಷ್ಟು ಅಸಂವೇದನಾಶೀಲರಾಗಿ ನಡೆದುಕೊಂಡಿರುವುದಕ್ಕೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ಅದರಲ್ಲೂ ಆಯೋಗದ ಮುಖ್ಯಸ್ಥೆ ಸುಮನ್ ಶರ್ಮಾರವರು ಸಹ ಈ ಸೆಲ್ಫಿಯಲ್ಲಿದ್ದಾರೆ.