ಸ್ವಚ್ಛ ಭಾರತ ಅಭಿಯಾನಕ್ಕೆ ರಜನೀಕಾಂತ್ ನಾಮನಿರ್ದೇಶನ

ಭಾನುವಾರ, 23 ನವೆಂಬರ್ 2014 (15:26 IST)
ಸೂಪರ್ ಸ್ಟಾರ್ ರಜನಿಕಾಂತ್  ಸ್ವಚ್ಛ ಭಾರತ ಅಭಿಯಾನಕ್ಕೆ ನಾಮ ನಿರ್ದೇಶಿತರಾಗಿದ್ದಾರೆ. ಅವರ ಸ್ನೇಹಿತ ಮತ್ತು ಹಿರಿಯ ತೆಲುಗು ಸ್ಟಾರ್ ಮೋಹನ್ ಬಾಬು ರಜನಿಯನ್ನು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.  

ಈ ಕುರಿತು ರಜನೀ ಪ್ರತಿಕ್ರಿಯೆ ನೀಡಿಲ್ಲ. ಆದರೆ ಖಚಿತವಾಗಿ ಅವರು ಈ ಸವಾಲನ್ನು ಸ್ವೀಕರಿಸಲಿದ್ದಾರೆ ಎಂದು ಊಹಿಸಲಾಗಿದೆ.
 
ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಪಡೆದಿದ್ದ ಕಮಲ್ ಹಾಸನ್ ಇತ್ತೀಚಿಗೆ  ತಮ್ಮ ಜನ್ಮದಿನದಂದು ತಮ್ಮ ಅಭಿಮಾನಿಗಳ ಜತಗೂಡಿ,  ನಗರದ ಹೊರಭಾಗದಲ್ಲಿರುವ ಮಡಂಬಾಕಮ್ ಕೆರೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
 
ತಮಿಳು ಚಿತ್ರರಂಗದ  ಅನೇಕ್ ಸ್ಟಾರ್ ನಟರು  ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸಲು ಆರಂಭಿಸಿದ್ದಾರೆ. ನಟಿ ಸಮಂತಾ ಹೈದರಾಬಾದ್ ರಸ್ತೆ ಸ್ವಚ್ಛಗೊಳಿಸಿದರೆ , ತಮನ್ನಾ ಮುಂಬೈನ ರಸ್ತೆಯೊಂದರಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.  ಸಮಂತಾರಿಂದ ನಾಮನಿರ್ದೇಶಿತರಾದ ಜನಪ್ರಿಯ ನಟಿ ತ್ರಿಶಾ ತಮ್ಮ ಆತ್ಮೀಯ ಸ್ನೇಹಿತೆಯ ಆಹ್ವಾನವನ್ನು ಸ್ವೀಕರಿಸಿದ್ದರು.

ವೆಬ್ದುನಿಯಾವನ್ನು ಓದಿ