ನದಿಜೋಡಣೆ ರೈತರ ಪ್ರಸ್ತಾಪಕ್ಕೆ ರಜನಿ ಬೆಂಬಲ: 1 ಕೋಟಿ ರೂ ಮೀಸಲು

ಸೋಮವಾರ, 19 ಜೂನ್ 2017 (11:45 IST)
ಚೆನ್ನೈ:ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳಿಗೆ, ‘ಯುದ್ಧಕ್ಕೆ ಸಿದ್ಧರಾಗಿ’ ಎಂದು ಕರೆ ನೀಡಿದ್ದ ಸೂಪರ್ ಸ್ಟಾರ್ ರಜನಿಕಾಂತ್, ರಾಜಕೀಯಕ್ಕೆ ಪದಾರ್ಪಣೆ ಮಾಡುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ದಕ್ಷಿಣ ಭಾರತದ ನದಿ ಜೋಡಣೆಗಾಗಿ 1 ಕೋಟಿ ರೂ. ಮೀಸಲಿಟ್ಟಿದ್ದಾರೆ.
 
ಪಿ. ಅಯ್ಯಕನ್ನು ನೇತೃತ್ವದ 16 ರೈತರ ನಿಯೋಗವನ್ನು ಭೇಟಿ ಮಾಡಿದ ರಜನಿಕಾಂತ್, ನದಿಗಳ ಜೋಡಣೆ ಮಾಡಬೇಕೆಂಬ ಅವರ ಮನವಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ರಜನೀಕಾಂತ್ ನದಿ ಜೋಡಣೆಗಾಗಿ 1 ಕೋಟಿ ರು ಹಣ ನಮಗೆ ನೀಡಲು ಮುಂದಾದರು, ಆದರೇ ಅದನ್ನು ಪಡೆಯುವ ಅರ್ಹ ವ್ಯಕ್ತಿಗಳು ನಾವಲ್ಲ, ಆ ಹಣವನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಎಂದು ರಜನಿ ಅವರಲ್ಲಿ ಮನವಿ ಮಾಡಿರುವುದಾಗಿ ಆಯಕಣ್ಣು ಹೇಳಿದ್ದಾರೆ.
 
ಮಹಾನದಿ, ಗೋದಾವರಿ, ಕೃಷ್ಣಾ, ಪಾಲಾರು ಮತ್ತು ಕಾವೇರಿ ನದಿಗಳ ಜೋಡಣೆಯಾಗಬೇಕು ಎಂಬ ರೈತರು ನೀಡಿರುವ ಪ್ರಸ್ತಾವನೆಗೆ ರಜನಿ ಬೆಂಬಲ ಘೋಷಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ