ಉಭಯ ಸದನಗಳ ಸದಸ್ಯರು ಅಬ್ದುಲ್ ಕಲಾಂ ಸಾಧನೆಯನ್ನು ನೆನೆದರು.
ಪ್ರೀತಿಯ ಕೆಲಸ ಮಾಡುತ್ತಲೇ ಕಲಾಂ ಕೊನೆಯುಸಿರೆಳೆದರು. ಅವರು ದೇಶಕ್ಕೆ ಎಣಿಸಲಾರದಷ್ಟು ಕೊಡುಗೆ ನೀಡಿದ್ದಾರೆ. ಅವರ ಮಾತುಗಳು ನಮಗೆಲ್ಲರಿಗೂ ಆದರ್ಶ. ಉತ್ಸಾಹದ ಚಿಲುಮೆಯಾಗಿದ್ದ ಅವರು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಅವರ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.