ಬಾಬ್ರಿಮಸೀದಿ ವ್ಯಾಜ್ಯದ ಕಕ್ಷಿಗಾರ ಮೊಹಮ್ಮದ್ ಹಶೀಂ ಅನ್ಸಾರಿ, ಮತ್ತೆ ಈ ಪ್ರಕರಣವನ್ನು ಮುಂದುವರೆಸಲು ಬಯಸುವುದಿಲ್ಲ. ಬಾಲ ರಾಮ ಮುಕ್ತನಾಗುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ ಕೆಲ ದಿನಗಳಲ್ಲಿಯೇ ನಾಯಕ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅನ್ಸಾರಿ, ರಾಜಕೀಯ ಲಾಭಕ್ಕೋಸ್ಕರ ಹೆಣಗುವ ಜನರು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ರಾಮಲೀಲಾ ಮಾತ್ರ ಟೆಂಟ್ಲ್ಲಿದ್ದಾನೆ ಎಂದು ಖೇದ ವ್ಯಕ್ತ ಪಡಿಸಿದ್ದರು. ಉತ್ತರ ಪ್ರದೇಶದ ಸಚಿವ ಆಜಂ ಖಾನ್ ರಾಮ ಜನ್ಮಭೂಮಿ ವಿವಾದ ಸತ್ತ ವಿಷಯ ಸತ್ತ ಸಮಸ್ಯೆ ಎಂದಿದ್ದಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದ ಅವರು, ಬಾಬ್ರಿ ವಿಷಯದಲ್ಲಿ ಖಾನ್ ರಾಜಕೀಯ ಆಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.