ನಾಲ್ಕರ ಬಾಲೆಯ ಮೇಲೆ ಕೀಚಕ ಕೃತ್ಯ

ಶುಕ್ರವಾರ, 22 ಆಗಸ್ಟ್ 2014 (08:42 IST)
ನಾಲ್ಕು ವರ್ಷದ ಹಾಲುಗಲ್ಲದ ಹಸುಳೆಯ ಮೇಲೆ ಕೀಚಕ ಮನಸ್ಥಿತಿಯ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ ಘಟನೆ  ರಾಜಸ್ಥಾನದ  ಅಲವರ್ ಜಿಲ್ಲೆಯ ಮಾಲಾಖೇಡಾದಲ್ಲಿ ನಡೆದಿದೆ.

ಘಟನೆಯ ಆರೋಪಿ ವಿಜಯ್ ಕುಮಾರ್ ನಾಪತ್ತೆಯಾಗಿದ್ದು  ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೋಲಿಸ್ ಅಧಿಕಾರಿ ಸುಖ್‌ವೀರ್ ಸಿಂಗ್  ಹೇಳಿದ್ದಾರೆ.
 
ಆತನ ವಿರುದ್ಧ ಭಾರತೀಯ ದಂಡ ಸಂಹಿತೆ 376ರ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದ್ದು, ಪೀಡಿತ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ವರದಿಗಳ ಪ್ರಕಾರ ಪಕ್ಕದ ಮನೆಯ ಮಕ್ಕಳ ಜತೆ ಆಡುತ್ತಿದ್ದ ಪೀಡಿತೆಯನ್ನು ಎತ್ತಿಕೊಂಡು ಹೋದ ಆರೋಪಿ, ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ದುಷ್ಕರ್ಮವನ್ನೆಸಗಿದ್ದಾನೆ. 

ವೆಬ್ದುನಿಯಾವನ್ನು ಓದಿ