ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಈಗಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಆರೋಪಿ ವಿರುದ್ಧದ ಪ್ರಕರಣವನ್ನು ಮುಂದುವರೆಸುವುದಿಲ್ಲ ಎಂದು ಹೇಳಿ ಅಪರಾಧಿ ವಿರುದ್ಧ ದಾಖಲು ಮಾಡಿದ್ದ ದೂರನ್ನು 2013ರಲ್ಲಿ ಹಿಂಪಡೆದಿದ್ದಳು. ಯುವತಿಯ ಈ ಮನವಿಯನ್ನು ತಿರಸ್ಕರಿಸಿದ್ದ ಮಧ್ಯಪ್ರದೇಶದ ಹೈ ಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಪುರಾವೆಗಳು ಧೃಢೀಕರಿಸುವ ಅಗತ್ಯವಿಲ್ಲ, ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಭಾಗಿಯಾಗಿರುವುದು ಸಾಬೀತಾಗಬೇಕಿರುವುದು ಮುಖ್ಯ ಎಂದು ಹೇಳಿ ಅಪರಾಧಿಯ ಶಿಕ್ಷೆಯನ್ನು ಮುಂದುವರೆಸುವಂತೆ ಆದೇಶ ನೀಡಿತ್ತು.
ಮಧ್ಯಪ್ರದೇಶ ಹೈಕೋರ್ಟ್ನ ಈ ಆದೇಶವನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಇಕ್ಬಾಲ್ ಮತ್ತು ಪಿನಾಕಿ ಚಂದ್ರ ಘೋಷ್ ಅವರಿದ್ದ ನ್ಯಾಯಪೀಠವು ಅತ್ಯಾಚಾರಕ್ಕೊಳಪಟ್ಟ ಯುವತಿ ಪ್ರಕರಣ ಸಂಬಂಧ ರಾಜಿಯಾಗಲು ಒಪ್ಪಿಗೆ ನೀಡಿದ್ದು, ತಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ಪ್ರಕರಣವನ್ನು ಮುಂದುವರೆಸುವುದು ನನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ಧೃಢ ಹಾಗೂ ವಿಶೇಷ ಕಾರಣವನ್ನು ನೀಡಿದ್ದಾರೆ.