ಭಾರತದ ಪ್ರವಾಸದಲ್ಲಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯೊಂಗ್ ಕಿಮ್ ಜತೆ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕುಶಲ ಮಾನವ ಸಂಪನ್ಮೂಲದ ತಳಹದಿಯನ್ನು ಅಭಿವೃದ್ಧಿ ಪಡಿಸಬೇಕಾಗಿರುವುದರಿಂದ ನಮಗೆ ಹಣಕ್ಕಿಂತ ಮುಖ್ಯವಾಗಿ ಹೊಸ ಹೊಸ ಕಲ್ಪನೆಗಳು,,ಜ್ಞಾನ ಮತ್ತು ಪರಿಣಿತರ ಅಗತ್ಯವಿದೆ ಎಂದು ಹೇಳಿದ್ದಾರೆ.
"ನಾವು ವಿಶ್ವಬ್ಯಾಂಕ್ನಿಂದ ಸಮೂಹ ಉತ್ಪಾದನೆಯನ್ನಷ್ಟೇ ಬಯಸುತ್ತಿಲ್ಲ. ಜತೆಗೆ ಜನಸಾಮಾನ್ಯರಿಂದ ಉತ್ಪಾದನೆಯನ್ನು ಕೂಡ ಬಯಸುತ್ತೇವೆ , ಅದರಿಂದ ನಮ್ಮ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ .ಇಂದು ವಿಶ್ವ ತನ್ನ ಗಮನವನ್ನು ವಸ್ತುಗಳ ವ್ಯಾಪಾರದಲ್ಲಿ ಕೇಂದ್ರೀಕರಿಸಿದೆ. ಭವಿಷ್ಯದಲ್ಲಿ ಕುಶಲ ಉದ್ಯೋಗಿಗಳನ್ನು ಪಡೆಯುವುದೇ ದೊಡ್ಡ ಸಮಸ್ಯೆಯಾಗಲಿದೆ. ನಾವು ಈ ದಿಕ್ಕಿನಲ್ಲಿ ಕೆಲಸ ಮಾಡಬೇಕು" ಎಂದು ಮೋದಿ ಹೇಳಿದ್ದಾರೆ.