ಇತ್ತೀಚೆಗೆ ಬೊಮನ್ ಇರಾನಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆಗಳು ಬಂದಿವೆಯೆಂದು ವರದಿಯಾಗಿತ್ತು. ಬೊಮನ್ ಇರಾನಿ ಬಳಿಕ ಪಾತಕಿ ರವಿ ಪೂಜಾರಿಯಿಂದ ರಾಜ್ ಕುಂದ್ರಾಗೆ ಬೆದರಿಕೆ ಕರೆಗಳು ಬರುತ್ತಿವೆ. ಕುಂದ್ರಾ ಅವರ ಸಹಾಯಕನಿಗೆ ರವಿ ಪೂಜಾರಿ ಎರಡು ಕರೆಗಳನ್ನು ಮಾಡಿದ್ದು, ಮೊದಲ ಕರೆಯಲ್ಲಿ 3 ಕೋಟಿ ರೂ. ಮೊತ್ತದ ಬೇಡಿಕೆಯನ್ನು ಅವನು ಮಂಡಿಸಿದ್ದಾನೆ.