ಬವಾನಾದಲ್ಲಿ ವ್ಯಾಪಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ದಿನದಲ್ಲಿ ಅನೇಕ ಬಾರಿ ಬಟ್ಟೆಗಳನ್ನು ಬದಲಾಯಿಸುವ ಪ್ರಧಾನಿ ಮೋದಿ ನೋಟು ನಿಷೇಧದದ ವಿಷಯದಲ್ಲಿ ಮಾತ್ರ ಕೆಲ ಸಮಯವನ್ನು ತ್ಯಾಗ ಮಾಡಿ ಎಂದು ಜನರಿಗೆ ಬೋಧಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ನೋಟು ರದ್ಧತಿಯಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು, ವ್ಯಾಪಾರಿಗಳು, ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಜನರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರಧಾನಿ ಪ್ರಧಾನಿ ಬಟ್ಟೆ ಬದಲಾಯಿಸುವುದರಲ್ಲಿ ವ್ಯಸ್ತರಾಗಿದ್ದಾರೆ.ಯಾವುದೇ ನಿರ್ಧಾರವನ್ನು ಅನುಷ್ಠಾನಕ್ಕೆ ತರುವ ಮೊದಲು ಅದನ್ನು ನಿಮ್ಮ ಮೇಲೆ ಹೇರಿಕೊಳ್ಳಿ ಎಂದು ಕೇಜ್ರಿವಾಲ್ ಸಲಹೆ ನೀಡಿದ್ದಾರೆ.