ಶೌಚಾಲಯ ನಿರ್ಮಿಸಲಿಲ್ಲವೆಂದು ಆತ್ಮಹತ್ಯೆ

ಶನಿವಾರ, 4 ಜುಲೈ 2015 (11:04 IST)
ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿ ಕೊಡಲು ತಂದೆ-ತಾಯಿ ಒಪ್ಪದ ಕಾರಣ ನೊಂದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.  

ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ 17 ವರ್ಷದ ಯುವತಿ ಖುಷ್ಬು ಕುಮಾರಿ ಬಯಲು ಶೌಚಾಲಯಕ್ಕೆ ಹೋಗಲು ಮುಜುಗರ ಪಟ್ಟುಕೊಳ್ಳುತ್ತಿದ್ದಳು. ಈ ಕಾರಣಕ್ಕೆ ಮನೆಯ ಬಳಿಯೇ ಶೌಚಾಲಯ ನಿರ್ಮಿಸಿ ಕೊಡುವಂತೆ ತಂದೆ -ತಾಯಿ ಬಳಿ ಹಲವು ಬಾರಿ ಕೇಳಿಕೊಂಡಿದ್ದಳು. ಆದರೆ ಆಕೆಯ ಮದುವೆಗಾಗಿ ಹಣವನ್ನು ಉಳಿಸುವ ಉದ್ದೇಶದಿಂದ ಶೌಚಾಲಯ ನಿರ್ಮಾಣ ಮಾಡಿಕೊಡಲು  ಆಕೆಯ ತಂದೆ ಒಪ್ಪಲಿಲ್ಲ. 
 
"ಅವರದು ನಾಲ್ಕು ಕೋಣೆಯುಳ್ಳ ಮನೆ. ಆದರೆ ಬಡವರಾಗಿದ್ದ ಅವರು ಮಗಳ ಮದುವೆ ಖರ್ಚಿಗೆ ಹಣವನ್ನು ಹೊಂದಿಸುವುದಕ್ಕೆ ಪ್ರಥಮ ಆದ್ಯತೆ ನೀಡಿದ್ದರಿಂದ ಶೌಚಾಲಯದ ಬೇಡಿಕೆಯನ್ನು ನಿರ್ಲಕ್ಷಿಸಿದ್ದರು. ತನ್ನ ತಂದೆ- ತಾಯಿ ಶೌಚಾಲಯ ನಿರ್ಮಿಸಿ ಕೊಟ್ಟಿಲ್ಲವೆಂದು ಬಹುವಾಗಿ ನೊಂದಿದ್ದ ಖುಷ್ಬೂ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನ್ ಒಂದಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ", ಎಂದು ಪೊಲೀಸ್ ಅಧೀಕ್ಷಕರಾದ ವಿಪುಲ್  ಶುಕ್ಲಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ