ಅಬಕಾರಿ ಸಚಿವರ ರಾಜೀನಾಮೆ ವಿಚಾರ: ನಾಳೆ ರಾಜಧಾನಿಯಲ್ಲಿ ಚರ್ಚೆ

ಬುಧವಾರ, 28 ಜನವರಿ 2015 (11:25 IST)
ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದು, ವಿಚಾರ ಕುರಿತು ಚರ್ಚಿಸಲು ಬೆಂಗಳೂರಿಗೆ ಬನ್ನಿ ಎಂದು ಸೂಚಿಸಿದ್ದಾರೆ ಎಂಬುದಾಗಿ  ತಿಳಿದು ಬಂದಿದೆ. 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೋಳಿ, ರಾಜೀನಾಮೆ ಮಿಚಾರ ಕುರಿತು ಚರ್ಚಿಸಬೇಕಿದೆ. ಹಾಗಾಗಿ ನೀವು ಬೆಂಗಳೂರಿಗೆ ಬನ್ನಿ ಎಂದು ದೂರವಾಣಿ ಕರೆ ಮಾಡಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಇಂದು ಸಂಜೆ ಬೆಂಗಳೂರಿಗೆ ತೆರಳಲಿದ್ದೇನೆ ಎಂದು ತಿಳಿಸಿದ್ದಾರೆ. 
 
ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರೂ ಪ್ರತಿಕ್ರಿಯಿಸಿದ್ದು, ಸತೀಶ್ ಜಾರಕಿಹೋಳಿ ಬಹಳ ಸೆನ್ಸಿಟೀವ್ ಮನುಷ್ಯ, ಹಾಗಾಗಿ ನಾಳೆ ಅವರನ್ನು ಬೆಂಗಳೂರಿಗೆ ಬರಲು ದೂರವಾಣಿ ಮೂಲಕ ಸೂಚಿಸಿದ್ದೇನೆ. ಅವರು ನಾಳೆಯೇ ರಾಜಧಾನಿ ಸೇರಲಿದ್ದು, ಆಗ ವಿಚಾರ ಸಂಬಂಧ ಚರ್ಚಿಸಲಿದ್ದೇನೆ. ಆ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲದೆ ಖಾತೆಯನ್ನು ಬದಲಿಸಿಕೊಡುವಂತೆ ಈ ಹಿಂದೆ ನನ್ನೊಂದಿಗೆ ಚರ್ಚಿಸಿದ್ದರು. ಆದರೆ ಸಂಪುಟ ವಿಸ್ತರಣೆ ಬಳಿಕ ನಿಮ್ಮ ಖಾತೆಯನ್ನು ಬದಲಿಸುವುದಾಗಿ ತಿಳಿಸಿದ್ದೆ. ಆದರೆ ಅದಕ್ಕೂ ಮುನ್ನವೇ ರಾಜೀನಾಮೆಗೆ ಮುಂದಾಗಿರುವುದು ಬೇಸರ ತಂದಿದೆ ಎಂದಿದ್ದಾರೆ. 
 

ವೆಬ್ದುನಿಯಾವನ್ನು ಓದಿ