ಅಪರಿಚಿತರಿಂದ ಆರ್‌ಜೆಡಿ ನಾಯಕ ರವೀಂದ್ರ ಯಾದವ್‌ ಕೊಲೆ

ಶುಕ್ರವಾರ, 25 ಏಪ್ರಿಲ್ 2014 (11:36 IST)
ಬಿಹಾರದ ಸುಪೌಲ್ ಜಿಲ್ಲೆಯ ನಗರ ಥಾನಾ ಕ್ಷೇತ್ರದ ಲೋಹಿಯಾ ನಗರದ ಚೌಕಿಯ ಬಳಿ ಆರ್‌ಜೆಡಿ ನಾಯಕ ರವೀಂದ್ರ ಯಾದವ್‌ ಗುರುವಾರ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಗಳಿಂದ ಭೀಕರವಾಗಿ ಕೊಲೆಗೀಡಾಗಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. 
 
ಲೋಹಿಯಾ ನಗರದ ಚೌಕಿಯಲ್ಲಿರುವ ತಮ್ಮ ಮನೆಯಲ್ಲಿ ರವೀಂದ್ರ ಯಾದವ್‌ ಮಲಗಿದ್ದರು. ಆಗ ಅವರಿಗೆ ದೂರವಾಣಿ ಕರೆ ಮಾಡಿದ ಕೆಲವರು ಮನೆಯಿಂದ ಹೊರಬರುವಂತೆ ಕರೆದರು. ಆ ನಂತರ ಅವರನ್ನು ಸರಳಿನಿಂದ ಥಳಿಸಿ ಸಾಯಿಸಲಾಯಿತು ಎಂದು ವರದಿಯಾಗಿದೆ. 
 
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾದವ್ ಸುಪೌಲ್ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಎಂದು ಪೋಲಿಸ್ ಅಧೀಕ್ಷಕರಾದ ಸುಧೀರ್ ಕುಮಾರ್ ಪೌರಿಕಾ ತಿಳಿಸಿದ್ದಾರೆ. 
 
ಅಜ್ಞಾತ ಆಪಾದಿಕರ ವಿರುದ್ಧ ಕೇಸ್ ದಾಖಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಶವವನ್ನು ಪೋಸ್ಟ್ ಮಾರ್ಟಮ್‌ಗೆ ಕಳುಹಿಸಲಾಗಿದೆ.  

ವೆಬ್ದುನಿಯಾವನ್ನು ಓದಿ