ಮಧ್ಯಪ್ರದೇಶ್- ಗುಜರಾತ್ ಗಡಿ ಪ್ರದೇಶದ (ಜಬುವಾ ಜಿಲ್ಲೆ) ಮಾಂಡ್ಲಾ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿತ್ತು. 150 ಜನರಿದ್ದ ದಿಬ್ಬಣ ಗುಜರಾತ್ನ ಗರ್ಬಾರಾದಿಂದ ಮಧ್ಯಪ್ರದೇಶದ ಮಾಂಡ್ಲಾಕ್ಕೆ ತೆರಳುತ್ತಿದ್ದ ವೇಳೆ ದಾಳಿ ಮಾಡಿದ ದರೋಡೆಕೋರರು ಚಿನ್ನಾಭರಣ, ನಗದು ಹಣವನ್ನು ದೋಚಿದ್ದರು. ಆ ಸಂದರ್ಭಧಲ್ಲಿ ವಧು ಇವರನ್ನು ನಾನು ಗುರುತಿಸಿದ್ದೇನೆ ಎಂದು ಕಿರುಚಿಕೊಂಡಿದ್ದಳು. ಆಗ ದರೋಡೆಕೋರರು ಆಕೆಯನ್ನು ಸಹ ಎತ್ತಿಕೊಂಡು ಪರಾರಿಯಾಗಿದ್ದರು.
ದರೋಡೆಕೋರರು ಬಳಸಿದ್ದ ಜೀಪ್ನ್ನು ವಶಪಡಿಸಿಕೊಂಡಿದ್ದ ಜಬುವಾ-ದಾಹೋಡ್ ಪೊಲೀಸರು, ವಧುವಿನ ಪತ್ತೆಗಾಗಿ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಅಲಿರಾಜಪುರದ ಆಜಾದ್ ನಗರ್ ಎಂಬಲ್ಲಿ ದರೋಡೆಕೋರರ ಬಳಿಯಿದ್ದ ಯುವತಿಯನ್ನು ಪತ್ತೆ ಹಚ್ಚಲಾಯಿತು. ಆಕೆ ಪೊಲೀಸರಿಗೆ ಸುಳ್ಳು ಕತೆಯನ್ನು ಸೃಷ್ಟಿ ಮಾಡಿ ಹೇಳಲು ಪ್ರಯತ್ನಿಸಿದಳಾದರೂ ಕಲ್ಯಾಣಪುರದ ಪೆಟ್ರೋಲ್ ಪಂಪ್ ಒಂದರಲ್ಲಿ ಅಳಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಆಕೆ ದರೋಡೆಕೋರರಲ್ಲಿ ಇಬ್ಬರ ಜತೆ ಬೈಕ್ ಮೇಲೆ ಆರಾಮವಾಗಿ ಕುಳಿತುಕೊಂಡು ಹೋಗುತ್ತಿದ್ದ ದೃಶ್ಯಾವಳಿಗಳು ಸೆರೆಯಾಗಿದ್ದವು. ಇದು ಸತ್ಯವನ್ನು ಬಹಿರಂಗಗೊಳಿಸಿತು.