ಹಣದುಬ್ಬರ ಗಗನಕ್ಕೇರುವುದರ ಬಗ್ಗೆ ವ್ಯಾಕುಲಗೊಂಡಿರುವ ಆರ್ಎಸ್ಎಸ್ ಇತ್ತೀಚಿಗೆ ಬಿಜೆಪಿಯ ನೂತನ ಅಧ್ಯಕ್ಷ ಅಮಿತ್ ಶಾ ರವನ್ನು ದೆಹಲಿ ಮತ್ತು ನಾಗ್ಪುರ್ಗಳಲ್ಲಿ ಎರಡು ಸಲ ಭೇಟಿ ಮಾಡಿತು. ಆ ಸಂದರ್ಭದಲ್ಲಿ ಹಣದುಬ್ಬರವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ವಿಫಲವಾಗಿದ್ದು, ಇದು ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಅದು ವ್ಯಕ್ತಪಡಿಸಿತು.