ಕ್ರೀಡಾ ಮೀಸಲಾತಿಯಡಿಯಲ್ಲಿ ರಾಜ್ಯಸಭೆಗೆ ನಾಮನಿರ್ದೇಶಿತರಾಗಿರುವ ತೆಂಡೂಲ್ಕರ್ ಸದನದ ಕಲಾಪಗಳಲ್ಲಿ ಹಾಜರಾಗುತ್ತಿಲ್ಲ ಎಂದು ಕಳೆದೊಂದು ವಾರದಿಂದ ಪ್ರಶ್ನಿಸಲ್ಪಡುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣಕ್ಕೆ ತಾವು ಅಧಿವೇಶನಕ್ಕೆ ಹಾಜರಾಗಲಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು ಮತ್ತು ರಾಜ್ಯಸಭೆಯಿಂದ ಈ ಸಂಪೂರ್ಣ ಅಧಿವೇಶನದ ಅವಧಿಗಾಗಿ ರಜೆಯನ್ನು ಪಡೆದುಕೊಂಡಿದ್ದಾರೆ.
"ಅವರು ದೆಹಲಿಗೆ ಬಂದಿದ್ದರು. ವಿಜ್ಞಾನ ಭವನಕ್ಕೆ ಹೋಗಿದ್ದರು. ಆದರೆ ರಾಜ್ಯಸಭೆಗೆ ಬರದಾದರು. ಸಂಸತ್ತಿನ ಸದಸ್ಯರೊಬ್ಬರು ದೆಹಲಿಗೆ ಬರುತ್ತಾರೆ ಮತ್ತು ಅಧಿವೇಶನಕ್ಕೆ ಬರುತ್ತಿಲ್ಲ ಎಂದಾದರೆ ಅವರು ಸಂಸತ್ತನ್ನು ಗೌರವಿಸುತ್ತಿಲ್ಲ ಎಂದು ಅರ್ಥವಾಗುತ್ತದೆ. ದೆಹಲಿಯಲ್ಲಿದ್ದಾಗಲೂ ಕಲಾಪದಿಂದ ಯಾಕೆ ಹೊರಗಿದ್ದರು ಎಂಬುದಕ್ಕೆ ಸಚಿನ್ ಉತ್ತರ ನೀಡಬೇಕು" ಎಂದು ಅವರು ಆಗ್ರಹಿಸಿದ್ದಾರೆ.