ಕಾರ್ಯದಕ್ಷತೆ ತೋರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೋದಿ ಸೂಚನೆ

ಗುರುವಾರ, 28 ಜನವರಿ 2016 (16:57 IST)
ಪುನರಾವರ್ತಿತ ದೂರಿನ ಹೊರತಾಗಿಯೂ ಕಾರ್ಯದಕ್ಷತೆ ಸುಧಾರಿಸದ ಅಧಿಕಾರಿಗಳನ್ನು ವಜಾಗೊಳಿಸಲು ಪ್ರಧಾನಿ ಮೋದಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ನಿನ್ನೆ 7 ಆರ್‌ಸಿಆರ್‌ನಲ್ಲಿ ನಡೆದ ಸಚಿವರ ಮಟ್ಟದ ನಿಯೋಗದ ಸಭೆಯಲ್ಲಿ, ಹಲವಾರು ಬಾರಿ ಎಚ್ಚರಿಕೆ ನೀಡಿದ ನಂತರವೂಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳದಿರುವ ಅಧಿಕಾರಿಗಳ ವಿರುದ್ಧ ಕೆಲಸದಿಂದ ವಜಾ, ಪಿಂಚಣಿ ತಡೆಯಂತಹ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ದೂರುಗಳ ಕಡೆ ಗಮನ ಹರಿಸದೆ ಬೇಜವಬ್ದಾರಿ ಪ್ರದರ್ಶಿಸುವ ಅಧಿಕಾರಿಗಳಿಗೆ ಈ ಮೂಲಕ ಮೋದಿಯವರು ಬಿಸಿ ಮುಟ್ಟಿಸಿದ್ದಾರೆ.
 
ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಉನ್ನತ ಮಟ್ಟದ ದೂರು ನಿರ್ವಹಣಾ ವ್ಯವಸ್ಥೆಯೊಂದನ್ನು ಜಾರಿಗೊಳಿಸುವಂತೆ ಪ್ರಧಾನಿ ಸೂಚನೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ