ಮೊನ್ನೆ ಗಲ್ಲಿಗೇರಿಸಲ್ಪಟ್ಟ ಉಗ್ರ ಯಾಕೂಬ್ ಮೆಮೊನ್ ಪತ್ನಿಗೆ ರಾಜ್ಯಸಭೆ ಸದಸ್ಯತ್ವ ನೀಡಬೇಕಂತೆ. ಈ ಬೇಡಿಕೆಯನ್ನಿಟ್ಟಿದ್ದು ಪಕ್ಷವೊಂದರ ನಾಯಕನೆಂಬುದು ದೊಡ್ಡ ವಿಪರ್ಯಾಸ. 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಉಗ್ರ ಯಾಕೂಬ್ ಮೆಮೊನ್ ಪತ್ನಿ ರಹೀನ್ನನ್ನು ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂದು ತಮ್ಮ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದ ಸಮಾಜವಾದಿ ಪಕ್ಷದ ನಾಯಕರೊಬ್ಬರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.
ರಹೀನ್ ಹಲವು ವರ್ಷಗಳಿಂದ ಜೈಲಿನಲ್ಲಿದ್ದಳು. ಆಕೆ ಎಷ್ಟೊಂದು ನೋವನ್ನು ತಿಂದಿರಲಿಕ್ಕಿಲ್ಲ? ಇಂದಾಕೆ ಅಸಹಾಯಕಳಾಗಿದ್ದಾಳೆ. ಅವಳಂತೆ ಭಾರತದಲ್ಲಿ ಇಂತಹ ಅಸಂಖ್ಯ ಸಂಖ್ಯೆಯ ಮುಸ್ಲಿಂಮರು ಅಸಹಾಯಕತೆ ಭಾವದಲ್ಲಿದ್ದು, ತಮ್ಮ ಪರ ಹೋರಾಡುವವರು ಯಾರು ಎಂದು ಎದುರು ನೋಡುತ್ತಿದ್ದಾರೆ. ಆದ್ದರಿಂದ ರಹೀನ್ನನ್ನು ರಾಜ್ಯಸಭೆ ಸದಸ್ಯಳನ್ನಾಗಿ ದುರ್ಬಲ ಮತ್ತು ಅಸಹಾಯಕರ ಪಾಲಿನ ಧ್ವನಿಯಾಗಲು ಅವಕಾಸ ನೀಡಬೇಕು ಎಂದು ಘೋಸಿ ಪತ್ರದಲ್ಲಿ ಬರೆದಿದ್ದಾನೆ.