ಚೆನ್ನೈ ಜೈಲಿಗೆ ವರ್ಗಾವಣೆಗೆಯಾಗಲು ಶಶಿಕಲಾ ಪ್ಲಾನ್

ಭಾನುವಾರ, 19 ಫೆಬ್ರವರಿ 2017 (11:10 IST)
ಪಳನಿಸ್ವಾಮಿ ಸಿಎಂ ಆಗಿ ವಿಶ್ವಾಸಮತ ಯಾಚನೆ ಗೆದ್ದು 24 ಗಂಟೆ ಕಳೆಯುವಷ್ಟರಲ್ಲಿ ಶಶಿಕಲಾ ಪರಪ್ಪನ ಅಗ್ರಹಾರದಿಂದ ಚೆನ್ನೈ ಜೈಲಿಗೆ ವರ್ಗಾವಣೆಯಾಗುವ ಕುರಿತು ಪ್ಲಾನ್ ಮಾಡಿದ್ದಾರೆ.


ಕರ್ನಾಟಕ ಮತ್ತು ತಮಿಳುನಾಡು ನಡುವೆ ಕೆಲ ವಿವಾದಗಳಿದ್ದು, ಅವುಗಳನ್ನ ಮುಂದಿಟ್ಟುಕೊಂಡು ಭದ್ರತೆಯ ಕಾರಣವೊಡ್ಡಿ ಶಶಿಕಲಾ ವರ್ಗಾವಣೆಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಆಗೊಮ್ಮೆ ಶಶಿಕಲಾ ಮನವಿಯನ್ನ ಕೋರ್ಟ್ ಪುರಸ್ಕರಿಸಿದ್ದೇ ಆದರೆ, ಚೆನ್ನೈ ಜೈಲಿನಲ್ಲಿ ಕುಳಿತುಕೊಂಡೇ ಪರೋಕ್ಷವಾಗಿ ತಮಿಳುನಾಡಲ್ಲಿ ಆಡಳಿತ ನಡೆಸಲಿದ್ದಾರೆ ಚಿನ್ನಮ್ಮ. ಕೋರ್ಟ್`ನಲ್ಲಿ ಇದಕ್ಕೆ ಒಪ್ಪದಿದ್ದರೆ ಪೆರೋಲ್ ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.

ವೆಬ್ದುನಿಯಾವನ್ನು ಓದಿ