ಹೂಡಿಕೆದಾರರಿಗೆ 25 ಸಾವಿರ ಕೋಟಿ ರೂಪಾಯಿಗಳ ನಗದು ಹಣ ಮರಳಿಸಿದ ನಿಮ್ಮ ಕಕ್ಷಿದಾರನ ಯೋಗ್ಯತೆಯ ಬಗ್ಗೆ ಕೋರ್ಟ್ಗೆ ಅನುಮಾನವಿಲ್ಲ. ಆದರೆ, ಸಂಪೂರ್ಣ ಪ್ರಕರಣ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಣದ ಮೂಲವನ್ನು ನ್ಯಾಯಾಲಯದ ಮುಂದೆ ತಿಳಿಸಿ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಸಹರಾ ಕಂಪೆನಿಯ ಪರ ವಕೀಲರಿಗೆ ಕೋರಿದ್ದಾರೆ.
ನ್ಯಾಯಮೂರ್ತಿಗಳಾದ ಎ.ಆರ್.ದವೆ ಮತ್ತು ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 16 ಕ್ಕೆ ಮುಂದೂಡಿದ್ದು, ಅಂದು ಹಣ ಯಾವ ಮೂಲದಿಂದ ಬಂತು ಎನ್ನುವುದರಿಂದ ವಿಚಾರಣೆ ಆರಂಭವಾಗಲಿ ಎಂದು ನ್ಯಾಯಮೂರ್ತಿಗಳು ಸಹಾರಾ ಕಂಪೆನಿ ಪರ ವಕೀಲರಿಗೆ ತಿಳಿಸಿದ್ದಾರೆ.