ನ್ಯಾಯಮೂರ್ತಿ ಪಿ.ಸಿ.ಘೋಸೆ ಮತ್ತು ಆರ್.ಕೆ.ಆಗರ್ವಾಲ್ ನೇತೃತ್ವದ ನ್ಯಾಯಪೀಠ, ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ, ಮತ್ತು ಅವರ ಆತ್ಮಿಯ ಗೆಳತಿ ಶಶಿಕಲಾ ಹಾಗೂ ಇಬ್ಬರು ಸಂಬಂಧಿಕರಾದ ವಿ.ಎನ್.ಸುಧಾಕರನ್ ಮತ್ತು ಇಳವರಿಸಿಯವರಿಗೆ ನೋಟಿಸ್ ಜಾರಿ ಮಾಡಿ ಎಂಟು ವಾರಗಳೊಳಗಾಗಿ ಉತ್ತರಿಸುವಂತೆ ಆದೇಶಿಸಿದೆ.
ಕರ್ನಾಟಕ ಸರಕಾರ, ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಡಿಎಂಕೆ ನಾಯಕ ಕೆ,ಅನ್ಬಳಗನ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಮೇ 11 ರಂದು ಜಯಲಲಿತಾರ ಐದು ವರ್ಷ ಶಿಕ್ಷೆಯನ್ನು ರದ್ದುಪಡಿಸಿರುವ ಹೈಕೋರ್ಟ್ ಆದೇಶದ ತೀರ್ಪಿನ ಬಗ್ಗೆ ಮಧ್ಯಪ್ರವೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.