ರಾಷ್ಟ್ರಪತಿ ಪ್ರಶಸ್ತಿ ಪಡೆಯಲು ತೆರಳುತ್ತಿದ್ದ ಶಾಲಾ ಪ್ರಾಂಶುಪಾಲರ ದರೋಡೆ

ಗುರುವಾರ, 3 ಸೆಪ್ಟಂಬರ್ 2015 (18:57 IST)
ರಾಷ್ಟ್ರಪತಿ ಪದ ಪಡೆಯಲು ದೆಹಲಿಗೆ ತೆರಳುತ್ತಿದ್ದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರನ್ನು ಸಮತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ದರೋಡೆ ಮಾಡಿದ ಘಟನೆ ವರದಿಯಾಗಿದೆ.  
 
ಸಮತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಗ್ವಾಲಿಯರ್‌ನಿಂದ ದೆಹಲಿಗೆ ತೆರಳುತ್ತಿದ್ದ ಶಾಲೆಯ ಪ್ರಾಂಶುಪಾಲರನ್ನು ಆಗ್ರಾ ಮತ್ತು ಮಥುರಾ ನಗರಗಳ ಮಧ್ಯದಲ್ಲಿ ದರೋಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಪ್ರಾಂಶುಪಾಲರ ಪ್ರಕಾರ, ವ್ಯಾಪಾರಿಯಂತೆ ಡ್ರೆಸ್ ಧರಿಸಿದ್ದ ವ್ಯಕ್ತಿಯೊಬ್ಬ ಅವರ ಮೇಲೆ ಕೆಲ ಕೆಮಿಕಲ್ ಸಿಂಪಡಿಸಿ ಬ್ಯಾಗ್‌ನಲ್ಲಿದ್ದ 50 ಸಾವಿರ ರೂಪಾಯಿಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. 
 
ಕೇಂದ್ರೀಯ ಶಾಲೆಯ ಪ್ರಾಂಶುಪಾಲರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ