ಜೇಟ್ಲಿ ಅವರನ್ನು ಬೆಂಬಲಿಸಿ ಸೆಹ್ವಾಗ್, ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದ ವೇಳೆ ಡಿಡಿಸಿಎದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಅವರು ಎಲ್ಲ ಕ್ರಿಕೆಟಿಗರಿಗೂ ನ್ಯಾಯ ಒದಗಿಸಿದ್ದಾರೆ. ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಯಾವುದೇ ಆಟಗಾರರಿಗೂ ಸಮಸ್ಯೆಯಿದ್ದರೂ ತಕ್ಷಣ ಜೇಟ್ಲಿ ಸ್ಪಂದಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಜೇಟ್ಲಿ ಅವರ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಆಪ್ ಪಕ್ಷ ಮೊದಲು ಈ ಆರೋಪವನ್ನು ಹೊರಿಸಿದ್ದು, ಮಾಜಿ ಕ್ರಿಕೆಟಿಗ ಹಾಗೂ ಜೇಟ್ಲಿ ಅವರ ಪಕ್ಷದವರೇ ಆದ ಕೀರ್ತಿ ಅಜಾದ್ ಕೂಡ ಜೇಟ್ಲಿ ವಿರುದ್ಧ ಧ್ವನಿ ಎತ್ತಿದ್ದು ಇಂದು ಈ ಕುರಿತ ಸಾಕ್ಷ್ಯವನ್ನು ಸಹ ಬಿಡುಗಡೆ ಮಾಡಿದ್ದಾರೆ.