ಕಳೆದ ಸೋಮವಾರ ಜಯಲಲಿತಾ ಉತ್ತರಾಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಒ ಪನ್ನೀರ್ಸೆಲ್ವಂ ಜಯಾರವರನ್ನು ಭೇಟಿಯಾಗಿ ಅವರ ಆರ್ಶೀರ್ವಾದ ಪಡೆಯಲು ತಕ್ಷಣ ಬೆಂಗಳೂರಿಗೆ ದೌಡಾಯಿಸಿದರು. ನಿನ್ನೆ ರಾತ್ರಿಯೇ ಪರಪ್ಪರ ಅಗ್ರಹಾರ ತಲುಪಿದ ಅವರು ಮಾಜಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ವಿಶೇಷ ಅನುಮತಿಯನ್ನು ಪಡೆಯಲು ಪ್ರಯತ್ನಿಸದರಾದರೂ ಸಫಲರಾಗಲಿಲ್ಲ.