ಚೆನ್ನೈ ಮಹಾಪ್ರಳಯ: 1 ಕೋಟಿ ದೇಣಿಗೆ ನೀಡಿದ ಶಾರುಖ್

ಮಂಗಳವಾರ, 8 ಡಿಸೆಂಬರ್ 2015 (12:56 IST)
ಶತಮಾನದ ಮಹಾಮಳೆಗೆ ಸಿಲುಕಿ ನರಳಿದ ಚೆನ್ನೈ  ಮಹಾನಗರ ಸಹಜ ಸ್ಥಿತಿಗೆ ಮರಳುತ್ತಿದ್ದು ದೇಶದೆಲ್ಲೆಡೆಗಳಿಂದ ನೆರವಿನ ಮಹಾಪುರ ಹರಿದು ಬರುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಕೂಡಾ ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ ಘೋಷಿಸಿದ್ದಾರೆ.

ಕುಡಿಯುವ ನೀರು, ಆಹಾರ ಹಾಗೂ ವಿದ್ಯುತ್‌ಗಾಗಿ ಪರದಾಡುತ್ತಿರುವ ಪ್ರವಾಹ ಪೀಡಿತ ಜನತೆಯ ನೆರವಿಗೆ ಶಾರುಖ್‌ ಸಹಾಯ ಹಸ್ತ ಚಾಚಿದ್ದಾರೆ. ಶಾರುಕ್‌ ಅಷ್ಟೇ ಅಲ್ಲದೆ  ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ  ಸೇರಿದಂತೆ ಇನ್ನೂ ಹಲವಾರು ನಟರು, ಪ್ರಖ್ಯಾತ ಕ್ರೀಡಾಪಟುಗಳಾದ ಸೈನಾ ನೆಹ್ವಾಲ್, ದೀಪಿಕಾ ಪಳ್ಳಿಕಲ್ ಸಹ ಸಂತ್ರಸ್ತರ ನೆರವಿಗೆ ಮುಂದೆ ಬಂದಿದ್ದಾರೆ.

50ರ ಹರೆಯದ 'ಚೆನ್ನೈಎಕ್ಸಪ್ರೆಸ್ ' ಸ್ಟಾರ್  ಬಾಲಿವುಡ್ ನಟ ಶಾರುಖ್ ಖಾನ್ 1 ಕೋಟಿ ರೂ. ಪರಿಹಾರ ನೀಡಿದ್ದಾರೆ. ಡಿ.18ರಂದು ಬಿಡುಗಡೆಯಾಗಲಿರುವ ಶಾರುಖ್ ಚಿತ್ರ ದಿಲ್​ವಾಲೆಯ ಮೊದಲ ದಿನದ ಕಲೆಕ್ಷನ್ ಅನ್ನು ಕೂಡಾ ತಮಿಳುನಾಡಿಗೆ ನೀಡಲಿದ್ದಾರೆ ಎನ್ನಲಾಗಿದೆ.ಶಾರುಖ್ ತಮಿಳುನಾಡು ಮುಖ್ಯಮಂತ್ರಿಗೆ ಪತ್ರವೊಂದನ್ನು ಸಹ ಬರೆದಿದ್ದಾರೆ ಎಂದು ತಮಿಳುನಾಡಿನ ಮ್ಯಾಗಜಿನ್ ಸಿನಿಮಾ ವಿಕಟನ್​ನಲ್ಲಿ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ