ಗುರುವಾರ ಬಾಲಾಜಿಪುರಂನಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸದ್ ಸಭೆ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಶಂಕರಾಚಾರ್ಯರು, "ಬಾಲ್ಯದಲ್ಲಿ ಮೋದಿ ಬಡವರಾಗಿದ್ದಿರಬಹುದು ಮತ್ತು ಟೀ ಮಾರುತ್ತಿದ್ದಿರಬಹುದು. ಆದರೆ ಈಗ ಪ್ರಧಾನಿಯಾಗಿರುವು ಅವರು ತಾವೇ ಭಾರತವೆನಿಸುತ್ತಾರೆ ಮತ್ತು ಒಬಾಮಾ ಒಬ್ಬ ಅಮೇರಿಕನ್. ಒಬಾಮಾರಿಗೆ ಚಹಾ ಮಾಡಿ ಕುಡಿಸುವಷ್ಟು ಬಡ ದೇಶ ಭಾರತವಲ್ಲ , ಇದು ನಮ್ಮ ದೇಶಕ್ಕಾದ ಅವಮಾನ", ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಾಯಿಬಾಬಾರವರ ಕುರಿತು ಮಾತನಾಡಿದ ಶಂಕರಾಚಾರ್ಯ ಅವರು "ದೇವರು ಅಲ್ಲ, ಸಂತನೂ ಅಲ್ಲ , ಗುರುವೂ ಅಲ್ಲ. ಆದ್ದರಿಂದ ಅವರನ್ನು ಪೂಜಿಸಬೇಡಿ. ಆಗ ಮಾತ್ರ ಹಿಂದೂ ಧರ್ಮದ ರಕ್ಷಣೆಯಾಗುತ್ತದೆ", ಎಂದರು.