ಒಬಾಮಾರಿಗೆ ಚಹಾ ಕುಡಿಸಿ ಮೋದಿ ದೇಶಕ್ಕೆ ಅಪಮಾನ ಮಾಡಿದ್ದಾರೆ !

ಶುಕ್ರವಾರ, 30 ಜನವರಿ 2015 (12:48 IST)
ಸದಾ ಶಿರಡಿ ಸಾಯಿಬಾಬಾರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಮಾಡುವ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಈಗ ಪ್ರಧಾನಿ ಮೋದಿ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾರಿಗೆ ಚಹಾ ಮಾಡಿ ಕುಡಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. 
ಗುರುವಾರ  ಬಾಲಾಜಿಪುರಂನಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸದ್ ಸಭೆ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಶಂಕರಾಚಾರ್ಯರು, "ಬಾಲ್ಯದಲ್ಲಿ ಮೋದಿ ಬಡವರಾಗಿದ್ದಿರಬಹುದು ಮತ್ತು ಟೀ ಮಾರುತ್ತಿದ್ದಿರಬಹುದು. ಆದರೆ ಈಗ ಪ್ರಧಾನಿಯಾಗಿರುವು ಅವರು ತಾವೇ ಭಾರತವೆನಿಸುತ್ತಾರೆ ಮತ್ತು ಒಬಾಮಾ ಒಬ್ಬ ಅಮೇರಿಕನ್. ಒಬಾಮಾರಿಗೆ ಚಹಾ ಮಾಡಿ ಕುಡಿಸುವಷ್ಟು ಬಡ ದೇಶ ಭಾರತವಲ್ಲ , ಇದು ನಮ್ಮ ದೇಶಕ್ಕಾದ ಅವಮಾನ", ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  
 
ಸಾಯಿಬಾಬಾರವರ ಕುರಿತು ಮಾತನಾಡಿದ ಶಂಕರಾಚಾರ್ಯ ಅವರು "ದೇವರು ಅಲ್ಲ, ಸಂತನೂ ಅಲ್ಲ , ಗುರುವೂ ಅಲ್ಲ. ಆದ್ದರಿಂದ ಅವರನ್ನು ಪೂಜಿಸಬೇಡಿ. ಆಗ ಮಾತ್ರ ಹಿಂದೂ ಧರ್ಮದ ರಕ್ಷಣೆಯಾಗುತ್ತದೆ", ಎಂದರು. 
 
ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ತೋರಿಸುವ ಸಿನಿಮಾಗಳಿಗೆ  ಸೆನ್ಸಾರ್ ಬೋರ್ಡ್ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ