ಪನ್ನೀರ್ ಸೆಲ್ವಂ ಬೆಂಬಲಿಸಿದವರನ್ನು ಸಾಮೂಹಿಕವಾಗಿ ಉಚ್ಚಾಟಿಸಿದ ಶಶಿಕಲಾ

ಮಂಗಳವಾರ, 14 ಫೆಬ್ರವರಿ 2017 (15:03 IST)
ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬೆಂಬಲಿಸಿದ ಶಾಸಕ ಮತ್ತು ಸಂಸದರನ್ನು ಸಾಮೂಹಿಕವಾಗಿ ಪಕ್ಷದಿಂದ ಉಚ್ಚಾಟಿಸಿ ಎಐಎಡಿಎಂಕೆ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಆದೇಶ ಹೊರಡಿಸಿದ್ದಾರೆ.
 
ಪನ್ನೀರ್ ಸೆಲ್ವಂ ಸೇರಿದಂತೆ 11 ಸಂಸದರು, 10 ಶಾಸಕರು, 20 ನಾಯಕರುಗಳನ್ನು ಪಕ್ಷದಿಂದ ಸಾಮೂಹಿಕವಾಗಿ ಉಚ್ಚಾಟಿಸಲಾಗಿದೆ.  
 
ಶಶಿಕಲಾ ಆದೇಶಕ್ಕೆ ಪನ್ನೀರ್ ಸೆಲ್ವಂ ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಅವರ ಆದೇಶಕ್ಕೆ ಯಾವುದೇ ಬೆಲೆಯಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಮತ್ತೊಂದೆಡೆ, ಗೋಲ್ಡನ್ ಬೇ ರೆಸಾರ್ಟ್‌ನಲ್ಲಿರುವ ಶಶಿಕಲಾ ಬಣದ ಶಾಸಕರು ರಾಜ್ಯಪಾಲರಿಂದ ಸರಕಾರ ರಚನೆಗೆ ಆಹ್ವಾನ ಬರುವವರೆಗೆ ರೆಸಾರ್ಟ್ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ