ಹಲವು ಮಾತ್ರೆಗಳನ್ನು ಒಟ್ಟಿಗೆ ಸೇವಿಸಿರುವುದು ಪ್ರಾಥಮಿಕ ತಪಾಸಣೆ ವೇಳೆ ಖಚಿತಪಟ್ಟಿದ್ದು, ಆರೋಪಿ ಇಂದ್ರಾಣಿಯವರಿಗೆ ಅಪಸ್ಮಾರ ರೋಗವಿದ್ದು, ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಶುಕ್ರವಾರ ಮಧ್ಯಾಹ್ನ ತಮ್ಮಲ್ಲಿದ್ದ ಎಲ್ಲ ಮಾತ್ರೆಗಳನ್ನು ಒಂದೇ ಬಾರಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಅವರ ಸ್ಥಿತಿ ಗಂಭೀರವಾಗಿತ್ತು. ಇಂದು ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.